Saturday, 19 December 2015

ಪೂಜ್ಯರ ಹಿರಿಮೆ

ಪೂಜ್ಯರ ಹಿರಿಮೆ  

ಶ್ರೀ ಷ. ಬ್ರ .ಲಿಂ ಶಾಂತವೀರ ಶಿವಾಚಾರ್ಯರು 
ಕಲಬುರಗಿ ತಾಲೂಕಿನ ಪಟವಾದ ಗ್ರಾಮದಲ್ಲಿ ತಂದೆ ಸಿದ್ದಲಿಂಗಯ್ಯ, ತಾಯಿ ನಾಗಮ್ಮಾ ಅವರ ಉದರದಲ್ಲಿ ಜನ್ಮತಾಳಿ ಸೊಂತ ಶ್ರೀಮಠಕ್ಕೆ ಪೀಠಾಧಿಪತಿಗಳಾಗಿ ಉನ್ನತ ಶಿಕ್ಷಣ ಸಂಸ್ಕೃತದಲ್ಲಿ ಮುಗಿಸಿ, ಎಲ್ಲಾ ಭಾಷೆಗಳ ಪಾರಂಗತರಾಗಿ ಕರ್ನಾಟಕ  ಆಂಧ್ರ ಮಹಾರಾಷ್ಟ್ರ ಭಕ್ತರ ಮನದಲ್ಲಿ ಬೆರೆದು, ಪ್ರಾಚಿನ ಕಾಲದಲ್ಲಿದ್ದ ನರನಾಳದ ಮಲ್ಲಿಕಾರ್ಜುನ ದೇವಾಲಯವನ್ನು ಸಂಪೂರ್ಣ ಜೀಣೋದ್ಧಾರ ಮಾಡಿ ಭವ್ಯ ಮಂದಿರ ನಿರ್ಮಿಸಿ ಎಲ್ಲಾ ಭಕ್ತರು ಸಮಾನವೆಂದು ತಿಳಿದು ಇಚ್ಛಿಸಿದ ಭಕ್ತರಿಗೆ ಲಿಂಗಾಧಾರಣೆ ಮಾಡಿ "ಸರ್ವಧರ್ಮ ಒಂದೇ ಮಾನವ ಧರ್ಮ" ಎಂದು ತಿಳಿ ಹೇಳಿ ಪ್ರತಿ ಶ್ರಾವಣ ಮಾಸದಲ್ಲಿ ತಿಂಗಳ ಪರ್ಯಂತ ಮಹಾರುದ್ರಾಭಿಷೇಕ, ಗುರುಪೂರ್ಣಿಮಾ, ನವರಾತ್ರಿ ನಿಮಿತ್ಯ ದೇವಿ ಪಾರಾಯಣ, ಶಿವರಾತ್ರಿಯೆಂದು ಶ್ರೀ ಮಲ್ಲಿಕಾರ್ಜುನ ಜಾತ್ರೆಯನ್ನು ವೈಭವಪೂರ್ವವಾಗಿ ನಡೆಸಿಕೊಟ್ಟಿದ್ದಾರೆ.

ಶ್ರೀ ಪೂಜ್ಯರು ದೇವಿಶಕ್ತಿ ಪುರುಷರು ಪೂಜ್ಯದಲ್ಲಿ ದೇವರನ್ನು ತೋರಿಸಿಕೊಟ್ಟ ಮಹಾತ್ಮರು. ನರನಾಳವನ್ನು ಸುಕ್ಷೇತ್ರ ಮಾಡಿ ಬೇಡಿದ ಭಕ್ತರಿಗೆ ಬೇಡಿದ್ದನ್ನು ಕೊಟ್ಟು ಅವರ ಇಷ್ಟಾರ್ಥಗಳನ್ನ ಪೂರೈಸಿ ಅಷ್ಟ ಐಶ್ವರ್ಯ ಕೊಟ್ಟು ಎಲ್ಲರನ್ನು ಧನ್ಯರನ್ನಾಗಿ ಮಾಡಿದ್ದಾರೆ.

       ಪೂಜ್ಯರು ನರನಾಳವನ್ನು ಎರಡನೇ ಶ್ರೀಶೈಲವನ್ನಾಗಿ ಮಾಡಿ ಸುಕ್ಷೇತ್ರ ನರನಾಳ ಎಂದು ಭಕ್ತಸಮೂಹಕ್ಕೆ ತೋರಿಸಿಕೊಟ್ಟ ಹಾದಿಯಲ್ಲಿಯೇ ನಾವು ನಡೆದು ನಮ್ಮ ಬಾಳು ಪಾವನ ಮಾಡಿಕೊಂಡು ಸದಾ ಗುರುವಿನ ಸ್ಮರಣೆಯಲ್ಲಿ ಸಮಯ ಕಳೆದು ಧನ್ಯರಾಗಿದ್ದೇವೆ. ಸದಾ ಪೂಜ್ಯರ ಕೃಪೆ ನಮಗಿರಲಿ.

      ಶ್ರೀ ಹಣಮಂತರಾವ ಮಾಸ್ಟರ್ ಬೇಮಳಗಿ
ಮು|| ನರನಾಳ ತಾ|| ಚಿಂಚೋಳಿ ಜಿ|| ಕಲಬುರಗಿ

Thursday, 17 December 2015

ರಥೋತ್ಸವ

ಸುದ್ದಿ ಸಂಕ್ಷೇಪ
ಚಿಂಚೋಳಿ: ತಾಲೂಕಿನ ನರನಾಳ ಗ್ರಾಮದ 
ಮಲ್ಲಿಕಾರ್ಜುನ ದೇವಾಲಯದ 14ನೇ ಜಾತ್ರೆ,
 ರಥೋತ್ಸವ ಮಾ.11ರಂದು ಸಂಜೆ 6.30ಕ್ಕೆ
 ನಡೆಯಲಿದೆ. ರಥೋತ್ಸವ ನಿಮಿತ್ತ       ಸಂಜೆ
 ಶಿವಾನುಭವ ಚಿಂತನಗೋಷ್ಟಿಯ ನೇತೃತ್ವವನ್ನು 
ಷ.ಬ್ರ. ಶಿವಕುಮಾರ ಶಿವಾಚಾರ್ಯರು ವಹಿಸಲಿದ್ದಾರೆ. 
ಸಾನಿಧ್ಯವನ್ನು ಷ.ಬ್ರ. ವೀರ ತಪಸ್ವಿ ವೀರಭದ್ರ 
ಶಿವಾಚಾರ್ಯರು,ಕಡಗಂಚಿ, ಷ.ಬ್ರ.ಚೆನ್ನಮಲ್ಲ 
ಶಿವಯೋಗಿಗಳು ವಿರಕ್ತ ಮಠ ಹುಡುಗಿ ವಹಿಸಲಿದ್ದಾರೆ. 
ಮಾಜಿ ಶಾಸಕ ಸುನೀಲ್ ವಲ್ಯಾಪುರ ಅಧ್ಯಕ್ಷತೆ ವಹಿಸಲಿದ್ದಾರೆ.
 ಜಾತ್ರೆ ನಿಮಿತ್ತ 'ಹುಡುಗಿ ಮೆಚ್ಚಿದ ಹುಂಬ' ಎಂಬ
 ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.

ಕೃಪೆ:ಕನ್ನಡಪ್ರಭ

ಅಡ್ಡ ಪಲ್ಲಕ್ಕಿ ಮಹೋತ್ಸವ

             **!!ಶ್ರೀ ಮಲ್ಲಿಕಾರ್ಜುನ ಪ್ರಸನ್ನ!!**

                  ದಿನಾಂಕ 12-12-2015 ರಂದು
             ಕಾಶಿಪೀಠ ಜಗದ್ಗುರು ಮಹಾಸನ್ನಿಧಿಯ
                      ಅಡ್ಡ ಪಲ್ಲಕ್ಕಿ ಮಹೋತ್ಸವ

                  •••  12 ಗಂಟೆಗೆ ಧರ್ಮಸಭೆ  •••

ದಿವ್ಯ ಸಾನಿಧ್ಯ : ಶ್ರೀ ಶ್ರೀ ಶ್ರೀ 1008 ಕಾಶಿ ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರರು
ಕಾಶಿಪೀಠ

ನೇತೃತ್ವ : ಶ್ರೀ ಷ.ಬ್ರ ಶಿವಕುಮಾರ ಶಿವಾಚಾರ್ಯರು 
ಹಿರೇಮಠ ನರನಾಳ ಸೊಂತ

    ಮಂಟಪ ಪೂಜೆಗೆ ಆಗಮಿಸುವ ಪೂಜ್ಯಪಾದರು 

1. ಶ್ರೀ ಷ.ಬ್ರ ವೀರಭದ್ರ ಶಿವಾಚಾರ್ಯರು
ಸಂಸ್ಥಾನ ಕಟ್ಟಿಮಠ ಕಡಗಂಚಿ.

2. ಶ್ರೀ ಷ.ಬ್ರ ವಿಶ್ವರಾಧ್ಯ ಶಿವಾಚಾರ್ಯರು
ಮಳೇಂದ್ರಮಠ ಅಫಜಲಪೂರ

3. ಶ್ರೀ ಮ.ನಿ.ಪ್ರ ಜಯಶಾಂತಲಿಂಗ ಮಹಾಸ್ವಾಮಿಗಳು
ವಿರಕ್ತಮಠ ಹಿರೇನಾಗಾಂವ

4. ಶ್ರೀ ಷ.ಬ್ರ ಚಂದ್ರಗುಂಡ ಶಿವಾಚಾರ್ಯರು ಹೊನ್ನಕಿರಣಿಗಿ

5. ಶ್ರೀ ಷ.ಬ್ರ ಸಿದ್ದಮಲ್ಲ ಶಿವಾಚಾರ್ಯರು
ಕಲ್ಮಠ ಚಿಂಚನಸೂರ

6. ಶ್ರೀ ಷ. ಬ್ರ ಶಂಭುಲಿಂಗ ಶಿವಾಚಾರ್ಯರು
ಹಾವಲಿಂಗೇಶ್ವರ ಮಠ, ಉದಗೀರ

7. ಶ್ರೀ ಷ.ಬ್ರ ವಿರುಪಾಕ್ಷ ಶಿವಾಚಾರ್ಯರು
ಹಿರೇಮಠ ಹುಡುಗಿ

8. ಶ್ರೀ ಮ.ನಿ.ಪ್ರ ಚಿಕ್ಕಗುರುನಂಜೇಶ್ವರ ಮಹಾಸ್ವಮಿಗಳು
ಭರತನೂರ

Wednesday, 16 December 2015

ಜ್ಯೋತಿ ಯಾತ್ರೆ

                         ಜ್ಯೋತಿ ಯಾತ್ರೆ
      
      ದಿನಾಂಕ. 10-12-2015 ಗುರುವಾರದಂದು
      ಲಿಂ. ಷ.ಬ್ರ. ಶಾಂತವೀರ   ಶಿವಾಚಾರ್ಯರ
      ಜನ್ಮಸ್ಥಳ ಪಟವಾದ ಗ್ರಾಮದಿಂದ   ಸುಕ್ಷೇತ್ರ
      ನರನಾಳದವರೆಗೆ      ಸಮಸ್ತ       ಭಕ್ತರಿಂದ
      ನವಯುವಕರ ಬೈಕ್ ರ್ಯಾಲಿ,     ಸಂಗೀತ
      ವಾದ್ಯಮೇಳ, ಭಜನೆಯೊಂದಿಗೆ ತಲುಪುವುದು.

     ದಿನಾಂಕ 11-12-2015 ಶುಕ್ರವಾರ - ಸಂಜೆ 8
     ಗಂಟೆಯಿಂದ 
     "ಸಂಗೀತ ಹಾಸ್ಯ ರಸಮಂಜರಿ ಕಾರ್ಯಕ್ರಮ"
     
     ಸಾನಿಧ್ಯ       : ಶ್ರೀ ಷ.ಬ್ರ. ಶಿವಕುಮಾರ
                         ಶಿವಾಚಾರ್ಯರು ಸುಕ್ಷೇತ್ರ
                         ನರನಾಳ

     ಅಧ್ಯಕ್ಷತೆ      : ಶ್ರೀ ಷ.ಬ್ರ.     ತ್ರೀಮೂರ್ತಿ 
                         ಶಿವಾಚಾರ್ಯರು ಹಿರೇಮಠ
                         ತೋಟ್ನಳ್ಳಿ

    ನೇತೃತ್ವ        : ಶ್ರೀ ಷ.ಬ್ರ.        ಘನಲಿಂಗ
                         ಶಿವಾಚಾರ್ಯರು     ಪಾಲ
                         ಹಿಪ್ಪರಗಾ

   ಹಾಸ್ಯ ಕಲಾವಿದರು  : ಶ್ರೀ ಗುಂಡಣ್ಣ ಡಿಗ್ಗಿ
                                  ಶ್ರೀ ವೈಜನಾಥ ಸಜ್ಜನಶೆಟ್ಟಿ
                                  ಶ್ರೀ ರಾಚಯ್ಯ      ಸ್ವಾಮಿ
                                  ಖಾನಾಪೂರ

    ಸಂಗೀತ       : ಶ್ರೀ ವೇ. ರೇವಣಸಿದ್ದಯ್ಯ ಸ್ವಾಮಿ
                         ಕಲ್ಲೂರ

    ತಬಲಾ       : ಶ್ರೀ ಚಂದ್ರಕಾಂತ ಕೊಡಂಗಲ್.
                        ಚಿಮ್ಮನಚೋಡ.

        **************************************
      

ಪುಣ್ಯಸ್ಮರಣೋತ್ಸವ

     ||ಶ್ರೀ ಮಲ್ಲಿಕಾರ್ಜುನ ಪ್ರಸನ್ನ||

ಶ್ರೀ ಶ್ರೀ ಶ್ರೀ 1008 ಕಾಶಿ ಜಗಗ್ದುರು    ಡಾ||ಚಂದ್ರಶೇಖರ ಶಿವಾಚಾರ್ಯ
ಭಗವತ್ಪಾದರ ಅಡ್ಡಪಲ್ಲಕ್ಕಿ  ಮಹೋತ್ಸವ ಹಾಗೂ
     ಲಿಂ. ಶ್ರೀ ಷ.ಬ್ರ ಶಾಂತವೀರ ಶಿವಾಚಾರ್ಯರ ತೃತೀಯ ಪುಣ್ಯಸ್ಮರಣೋತ್ಸವ ನಿಮಿತ್ಯ 63 ಮಂಟಪದ ಪಾದ ಪೂಜೆಯ ಆಮಂತ್ರಣ ಪತ್ರಿಕೆ.

ದಿನಾಂಕ:10-12-2015 ರಿಂದ ದಿನಾಂಕ 12-12-2015 ಶನಿವಾರದವರೆಗೆ ನಡೆಯುವ ಕಾರ್ಯಕ್ರಮ.

ಸ್ಧಳ: ಶ್ರೀ ಮಲ್ಲಿಕಾರ್ಜುನ ದೇವಾಲಯ ಸುಕ್ಯ್ಚೆತ್ರ ನರನಾಳ  ತಾ||ಚಿಂಚೋಳಿ  ಜಿ||ಕಲಬುರ್ಗಿ